ಜೆ.ಕೆ. ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ "ಸ್ವ್ಯಾಬ್" ತಂಡ

ಪುಣೆಯಲ್ಲಿ ನಡೆಯಲಿರುವ ಭಾರತ ಕ್ರೀಡಾ ಪತ್ರಕರ್ತರ ಸಂಘದ ವಾರ್ಷಿಕ ಸಮಾವೇಶದಲ್ಲಿ ದಕ್ಷಿಣ ವಲಯ ತಂಡವನ್ನು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಎಂಟು ಸದಸ್ಯರು ಪ್ರತಿನಿಧಿಸಲಿದ್ದಾರೆ.

ಸಮಾವೇಶದ ಅಂಗವಾಗಿ ನಡೆಯುವ ಜೆ.ಕೆ. ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಾಗೂ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಟೂರ್ನಿಗಳಲ್ಲಿಯೂ ಸ್ವ್ಯಾಬ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಸ್ವ್ಯಾಬ್ ಸದಸ್ಯರು ಉತ್ತಮ ಪ್ರದರ್ಶನ ನೀಡಿ ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದರು.

ಈ ಬಾರಿಯೂ ಎಲ್ಲ ಕ್ರೀಡಾ ವಿಭಾಗಗಳಲ್ಲಿ ನಮ್ಮ ಸಂಘದ ಸದಸ್ಯರು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಗಮನ ಸೆಳೆಯಲಿ ಎಂದು ಶುಭಕೋರುತ್ತೇನೆ.

ತಂಡ ಇಂತಿದೆ:
ಆರ್. ಕೌಶಿಕ್ (ಡೆಕ್ಕನ್ ಹೆರಾಲ್ಡ್)
ಆರ್. ಸತೀಶ್ ಪಾಲ್ (ಬೆಂಗಳೂರು ಮಿರರ್)
ಆರ್. ಸತ್ಯನಾರಾಯಣ (ಟೈಮ್ಸ್ ಆಫ್ ಇಂಡಿಯಾ)
ಸತೀಶ್ ವಿಶ್ವನಾಥನ್ (ಟೈಮ್ಸ್ ಆಫ್ ಇಂಡಿಯಾ)
ಓಂಕಾರ ಮೂರ್ತಿ (ಪ್ರಜಾವಾಣಿ)
ಅಭಿಷೇಕ್ ಬಾಡ್ಕರ್ (ಡೆಕ್ಕನ್ ಕ್ರಾನಿಕಲ್)
ಮಲ್ಲಿಕಾಚರಣ್ ವಾಡಿ (ಉದಯವಾಣಿ)
ಮೊಹಮ್ಮದ್ ನೂಮಾನ್ (ಪ್ರಜಾವಾಣಿ)

ಧನ್ಯವಾದಗಳು:
ಡಿ.ವಿ. ಗರುಡ
ಕಾರ್ಯದರ್ಶಿ, ಸ್ವ್ಯಾಬ್