"ಸ್ವ್ಯಾಬ್" ಖಂಡನೆ...!

ಮಾವೋ ವಾದಿಗಳಿಗೆ ಸಂಬಂಧಿಸಿದ ವರದಿಯ ಸುದ್ದಿ ಮೂಲವನ್ನು ಬಹಿರಂಗಪಡಿಸಬೇಕೆಂದು ಶಿವಮೊಗ್ಗ ಪೊಲೀಸರು "ಪ್ರಜಾವಾಣಿ" ಪತ್ರಿಕೆಯ ಸಹ ಸಂಪಾದಕರಾದ ಪದ್ಮರಾಜ ದಂಡಾವತಿ ಮತ್ತು ವರದಿಗಾರ ರಾಹುಲ್ ಬೆಳಗಲಿ ಅವರಿಗೆ ನೋಟಿಸ್ ನೀಡಿರುವುದನ್ನು "ಸ್ವ್ಯಾಬ್" ಖಂಡಿಸುತ್ತದೆ.

ಪತ್ರಕರ್ತರಿಗೆ ನೋಟಿಸ್ ನೀಡಿರುವ ಪೊಲೀಸರು ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿರುವುದನ್ನು "ಸ್ವ್ಯಾಬ್" ವಿರೋಧಿಸುತ್ತದೆ. ಅಷ್ಟೇ ಅಲ್ಲ "ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕು" ಎಂದು ಆಗ್ರಹಿಸುತ್ತದೆ.