ಟಿಟಿ: "ಸ್ವ್ಯಾಬ್" ತಂಡಕ್ಕೆ ಫೈನಲ್ ಪಂದ್ಯದಲ್ಲಿ ನಿರಾಸೆ

ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತಂಡದವರು ಭಾರತ ಕ್ರೀಡಾ ಪತ್ರಕರ್ತರ ಸಂಘ (ಎಸ್.ಜೆ.ಎಫ್.ಐ.) ಆಶ್ರಯದಲ್ಲಿ ಪಣಜಿಯಲ್ಲಿ ಶನಿವಾರ ನಡೆದ ಎ.ಸಿ.ಬಾಲಿ ಟೇಬಲ್ ಟೆನಿಸ್ ಟೂನರ್ಿಯ ಫೈನಲ್ ಪಂದ್ಯದಲ್ಲಿ ನಿರಾಸೆಗೊಂಡು, ರನ್ನರ್ಸ್ ಅಪ್ ಸ್ಥಾನಕ್ಕೆ ಸಮಾಧಾನ ಪಟ್ಟಿತು.

ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ತಂಡವು 1-2ರಲ್ಲಿ ಮುಂಬೈ ಎದುರು ಸೋಲನುಭವಿಸಿತು. ಆರ್.ಕೌಶಿಕ್ ಅವರು ಉತ್ತಮ ಆಟವಾಡಿದರೂ, ಸಿಂಗಲ್ಸ್ ಪಂದ್ಯದಲ್ಲಿ ಗ್ದೆದು, ಡಬಲ್ಸ್ ಪಂದ್ಯದಲ್ಲಿ ನಿರಾಸೆ ಹೊಂದಿದರು.

ಕೌಶಿಕ್ 11-5, 11-6ರಲ್ಲಿ ಗೊರ್ಡಾನ್ ಡಿಕೊಸ್ಟಾ ವಿರುದ್ಧ ಸಿಂಗಲ್ಸ್ ಹಣಾಹಣಿಯಲ್ಲಿ ಯಶ ಪಡೆದರು. ಆದರೆ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಮಲ್ಲಿಕಾಚರಣ್ ಅವರು 9-11, 7-11ರಲ್ಲಿ ಪ್ರದೀಪ್ ವಿಜಯಕರ್ ಎದುರು ನಿರಾಸೆ ಹೊಂದಿದರು. ನಿರ್ಣಾಯಕ ಎನಿಸಿದ ಡಬಲ್ಸ್ ಪಂದ್ಯದಲ್ಲಿ ಮುಂಬೈನ ಗೊರ್ಡಾನ್ ಮತ್ತು ಅಭಿಜಿತ್ ಕುಲಕರ್ಣಿ ಜೋಡಿಯು ಕೌಶಿಕ್ ಹಾಗೂ ಮಲ್ಲಿಕಾಚರಣ್ ಅವರನ್ನು ಸೋಲಿಸಿತು.

ಇಎಸ್ಪಿಎನ್ ಪೆನಾಲ್ಟಿ ಕಿಕ್ ಸ್ಪರ್ಧೆಯ ಫೈನಲ್ ಹಂತದಲ್ಲಿಯೂ ಮುಂಬೈ ತಂಡವು 4-1ರಲ್ಲಿ ಬೆಂಗಳೂರಿನ ತಂಡವನ್ನು ಪರಾಭವಗೊಳಿಸಿತು. ಮೂರನೇ ಸ್ಥಾನವನ್ನು ದೆಹಲಿ ಪಡೆದುಕೊಂಡಿತು.