"ಸ್ವ್ಯಾಬ್" ಸ್ನೂಕರ್ ಟೂರ್ನಿ: ಆರ್. ಸತ್ಯ ಚಾಂಪಿಯನ್















"ಸ್ವ್ಯಾಬ್" ಸ್ನೂಕರ್ ಟೂರ್ನಿ: ಆರ್. ಸತ್ಯ ಚಾಂಪಿಯನ್

ಬೆಂಗಳೂರು: ಹಿರಿಯ ಕ್ರೀಡಾ ಪತ್ರಕರ್ತ ಆರ್. ಸತ್ಯ ಅವರು ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಆಶ್ರಯದಲ್ಲಿ ಭಾನುವಾರ ಉದ್ಯಾನನಗರಿಯಲ್ಲಿ ನಡೆದ "ಸ್ವ್ಯಾಬ್ ಸ್ನೂಕರ್ ಟೂರ್ನಿ-2011"ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಫೈನಲ್ ಪಂದ್ಯದಲ್ಲಿ ಅವರು 42-14 ಪಾಯಿಂಟುಗಳ ಅಂತರದಿಂದ ದೀಪಕ್ ವಿಕ್ರಮನ್ ಅವರ ವಿರುದ್ಧ ವಿಜಯ ಸಾಧಿಸಿದರು. ಬೆಂಗಳೂರು ವಿಹಾರ ಕೇಂದ್ರದ ಕಾರ್ಯದರ್ಶಿ ಜೆ.ಅಪ್ಪಾಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕದಿರೇನಹಳ್ಳಿ ಕ್ರಾಸ್ ಸ್ನೂಕರ್ ಪಾಯಿಂಟ್ ಕಾರ್ಯದರ್ಶಿ ಮಂಜುನಾಥ್ ಅವರು ಉಪಸ್ಥಿತರಿದ್ದರು.

ಫಲಿತಾಂಶಗಳು:

ಫೈನಲ್: ಆರ್. ಸತ್ಯಗೆ 42-14ರಲ್ಲಿ ದೀಪಕ್ ವಿಕ್ರಮನ್ ವಿರುದ್ಧ ಗೆಲುವು.

ಸೆಮಿಫೈನಲ್: ಆರ್.ಸತ್ಯಗೆ 35-16ರಲ್ಲಿ ಬಿ.ಸತೀಶ್ ವಿರುದ್ಧ ಜಯ. ದೀಪಕ್ ವಿಕ್ರಮನ್ ಅವರಿಗೆ 38-18ರಲ್ಲಿ ಡಿ.ಗರುಡ ವಿರುದ್ಧ ಗೆಲುವು.

ಕ್ವಾರ್ಟರ್ ಫೈನಲ್: ಆರ್.ಸತ್ಯಗೆ 39-37ರಲ್ಲಿ ಅವಿನಾಶ್ ನಾಯರ್ ವಿರುದ್ಧ ಗೆಲುವು. ಬಿ.ಸತೀಶ್ಗೆ 32-6ರಲ್ಲಿ ಬಿ.ಆರ್ ಪ್ರಶಾಂತ್ ಎದುರು ಜಯ. ಡಿ.ಗರುಡ ಅವರಿಗೆ 37-13ರಲ್ಲಿ ಕಿಶೋರ್ ಕುಮಾರ್ ಬೋಳಾರ್ ವಿರುದ್ಧ ಗೆಲುವು. ದೀಪಕ್ ವಿಕ್ರಮನ್ ಅವರಿಗೆ 37-5ರಲ್ಲಿ ಜಹೀರ್ ಎದುರು ವಿಜಯ.