"ಸ್ವ್ಯಾಬ್"ಗಾಗಿ ಓಡಿದ ಸೂಪರ್ ಮಾಡೆಲ್...!


ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ಸೂಪರ್ ಮಾಡೆಲ್ ಅವಿನಾಶ್ ಅವಸ್ಥಿ ಅವರು "ಸ್ವ್ಯಾಬ್" 35ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶೇಷವಾದ ಶುಭ ಹಾರೈಕೆ ಕಳುಹಿಸಿದ್ದಾರೆ. ಆ ಚಿತ್ರ ಇಲ್ಲಿದೆ ನೋಡಿ...!

"ಸ್ವ್ಯಾಬ್" ನೆನಪುಗಳ "ಖಜಾನೆ"

ಅದೊಂದು ನೆನಪುಗಳ ಖಜಾನೆ! ಹೌದು. ಒಂದೊಂದೇ ಫೈಲ್ ಹಾಗೂ ಆಲ್ಬಮ್ ಅನ್ನು ತಿರುವಿ ಹಾಕಿದರೆ ಅಲ್ಲಿ ನೆನಪುಗಳ ದೊಡ್ಡ ಬುತ್ತಿಯ ಗಂಟನ್ನು ತೆಗೆದ ಅನುಭವ. ಅಲ್ಲಿದ್ದ ನೆನಪಿನ ಸಂಚಿಕೆಗಳು ಕೂಡ ಸಾಕಷ್ಟು. ಅವೆಲ್ಲವನ್ನೂ ನೋಡಿದಾಗ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತನ್ನ 35 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೊಂದು ಚಟುವಟಿಕೆಗಳನ್ನು ನಡೆಸಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.

ನಾನು "ಸ್ವ್ಯಾಬ್" ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡ ನಂತರ ನನ್ನ ಕೈಯಾರೆ ಸ್ವ್ಯಾಬ್ ಬೀರುವನ್ನು ತೆಗೆದಿದ್ದು ಇಂದು ಅಂದರೆ ಬುಧವಾರ (26ನೇ ಮೇ 2010). ಇದಕ್ಕೂ ಮುನ್ನ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಈಗಿನ ಅಧ್ಯಕ್ಷರಾದ ಶ್ರೀಕುಮಾರ್ ಅವರು ಎರಡು ಬಾರಿ ಪ್ರೆಸ್ ಕ್ಲಬ್ ಕೋಣೆಯ ಒಂದು ಮೂಲೆಯಲ್ಲಿರುವ ಸ್ವ್ಯಾಬ್ ಬೀರುವನ್ನು ತೋರಿಸಿದ್ದರು. "ಹಳೆಯ ಸಾಕಷ್ಟು ದಾಖಲೆಗಳು ಇಲ್ಲಿವೆ; ಒಮ್ಮೆ ನೋಡಿ" ಎಂದು ಶ್ರೀಕುಮಾರ್ ಅವರು ಹೇಳಿದ್ದರು. ಅದಕ್ಕೆ ತಕ್ಕಂತೆ ಸಮಯ ಮಾಡಿಕೊಂಡು ಸುಮಾರು ಮೂರು ತಾಸು ಪ್ರತಿಯೊಂದು ಹಳೆಯ ಫೈಲ್, ಆಲ್ಬಮ್ ಹಾಗೂ ಸ್ಮರಣ ಸಂಚಿಕೆಗಳನ್ನು ನೋಡಿದೆ.

ಅದೊಂದು ಅದ್ಭುತ ಅನುಭವವೇ ಸರಿ. ಏಕೆಂದರೆ ನಾನು ನೋಡಿದ ಅಲ್ಲಿನ ಪ್ರತಿಯೊಂದು ದಾಖಲೆ ಪತ್ರವೂ ಸ್ವ್ಯಾಬ್ ಇತಿಹಾಸವನ್ನು ನನ್ನ ಕಣ್ಣೆದುರು ತೆರೆದು ಇಟ್ಟಿತು. ಆದರೆ ಒಂದಿಷ್ಟು ಬೇಸರವೂ ಆಯಿತು; ಮೂರು ತಾಸು ಪ್ರತಿಯೊಂದು ಫೈಲ್ ಮೇಲೆ ವರ್ಷಗಳ ಕಾಲದಿಂದ ಕುಳಿತಿದ್ದ ದೂಳು ಹಾರಿಸುವ ಕೆಲಸವನ್ನೂ ಮಾಡಬೇಕಾಯಿತು. ಅಷ್ಟೊಂದು ಅಮೂಲ್ಯವಾದ ದಾಖಲೆಗಳನ್ನು ನಾವು ಹೀಗೆ ಇಟ್ಟುಕೊಂಡಿದ್ದೇವಲ್ಲಾ ಎಂದು ಮನಸ್ಸಿಗೆ ಒಂದಿಷ್ಟು ಕಸಿವಿಸಿಯೂ ಆಯಿತು.

ನಮ್ಮ ಹಿರಿಯರು ಸ್ವ್ಯಾಬ್ ಬೆಳವಣಿಗೆಗಾಗಿ ಪಟ್ಟ ಶ್ರಮವನ್ನು ಎತ್ತಿ ತೋರಿಸುವಂತೆ ಅದಕ್ಕೊಂದು ಶೋಕೇಸ್ ಮಾಡಿಸುವ ಅಗತ್ಯವಿದೆ ಎಂದು ಕೂಡ ಅನಿಸಿತು. ಕರ್ನಾಟಕದ ಕ್ರೀಡಾ ಪತ್ರಿಕೋದ್ಯಮದ ಇತಿಹಾಸ ಬರೆದರೆ ಅದಕ್ಕೆ ಪೂರಕವಾಗುವಂತ ಅನೇಕ ಅಂಶಗಳು ಅಲ್ಲಿರುವ ಫೈಲ್ ಹಾಗೂ ಸ್ಮರಣ ಸಂಚಿಕೆಯಲ್ಲಿ ದಾಖಲಾಗಿವೆ. ವಿಶೇಷವಾದ ಲೇಖನಗಳನ್ನು ಕೂಡ ಆ ಸ್ಮರಣ ಸಂಚಿಕೆಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಸ್ವ್ಯಾಬ್ ಬೆಳವಣಿಗೆಗಾಗಿ ಬೆವರು ಸುರಿಸಿದ ಎಲ್ಲರ ನೆನಪು ಕೂಡ ಆ ದಾಖಲೆ ಪತ್ರಗಳಲ್ಲಿ ಅಡಗಿದೆ.

ಅಲ್ಲಿ ದೊರೆತಿರುವ ಎಲ್ಲ ವಿಷಯಗಳನ್ನು ಚುಟುಕಾಗಿ ಹೇಳುವುದು ಕಷ್ಟ. ಆದ್ದರಿಂದ ಅವುಗಳನ್ನು ತಮ್ಮ ಮುಂದೆ ಸರಣಿಯಾಗಿ ಹರಿಬಿಡುವುದು ನನ್ನ ಉದ್ದೇಶ. ಅಷ್ಟೇ ಅಲ್ಲ "ಸ್ವ್ಯಾಬ್ ನೆನಪಿನ ಖಜಾನೆ"ಯಂತೆ ಇರುವ ಪ್ರೆಸ್ ಕ್ಲಬ್ ಕೋಣೆಯಲ್ಲಿನ ಬೀರುನಲ್ಲಿ ಸಂಗ್ರಹವಾಗಿರುವ ಆಲ್ಬಮ್ ಒಳಗಿರುವ ಅನೇಕ ಚಿತ್ರಗಳನ್ನು ತಮ್ಮ ಮುಂದೆ ಇಡುವ ಪ್ರಯತ್ನವನ್ನು ಇದೇ ಬ್ಲಾಗ್ ಮೂಲಕ ಮಾಡಲು ಯತ್ನಿಸುತ್ತೇನೆ. ಜೊತೆಗೆ ಹಳೆಯ ನೆನಪಿನ ಸಂಚಿಕೆಗಳಲ್ಲಿನ ಲೇಖನಗಳನ್ನು ತಮ್ಮ ಮುಂದೆ ಯಥಾವತ್ತಾಗಿ ಇಡುವ ಪ್ರಯತ್ನವನ್ನೂ ಮಾಡಲಾಗುವುದು.

-ಡಿ.ವಿ. ಗರುಡ

SEMINAR FOR YOUNG SPORTS JOURNALISTS

The Iranian Sports Journalists' Association is going to organise a seminar for young sports journalists (under the age of 25) in Tehran in July.

SJFI can recommend a maximum of two sports scribes within the age group of 25 and under. The ISJA will provide lodge and boarding during the seminar in Tehran. Flight tickets from town or city in India to Tehran and back will have to be taken care of by the applicants.

Dead-line for sending the application form is June 15, 2010.

For Application Form and more information, please contact:

swab.reporters@gmail.com


SWAB 35th Year Celebration

SWAB 35th Year Celebration

P.R. VISWANATHAN


Whenever SWAB gets into a mood to celebrate, it is bound to remember H.S. Suryanarayana ('Suri', 'HSS') with strong sense of admiration, pride and gratitude. Introducing HSS just as a father figure will not speak eloquently of his huge image in the field of Kannada sports journalism. He was the first ever Kannada sports editor!

HSS was a committed and affectionate father to all the aspiring and young sports journalists since 1960 till he breathed his last during the last decade of the previous century. Towards the end of 1960s the Sports Journalists Federation of India was formed with the four zones (North, east, west and south) as its affiliated units.

Considering the meagre number of sports journalists in India itself, this format (four zones) was generally accepted during that period. So Bangalore (like Hyderabad) came under Tamil Nadu. “We must establish our own association and get it affiliated to the SJFI”, HSS felt. That was a long-term thinking. HSS must have realised that the number of sports journalists in Bangalore was bound to increase sooner or later. “Let us get ready for that”.

Thus the SWAB was born in the summer of 1974. With DH Srinivas, a childhood friend of HSS and his colleague in Prajavani, was like ‘Chickappa’ to all of us while S Devanth played the role of the eldest brother quite competently. Devanth went to on to becomeSAWB’s president and the SJFI vice-president later.


Hafeez is about our best treasurer till date. Precisely, he inspired all of us to understand the importance of a treasurer. The SWAB, in its inaugural year (1974) threw a party to visiting journalists at the West Indies-India Test Match in Bangalore(That was Garden City’s first ever Test match). And that was our first major function.


The visiting journalists carried sweet memories and also carried the message “SWAB can organise things”. Thanks to the periodical communications SWAB had with SJFI and others, we became very close with SJFI and its activities. HSS was the president and R Arvindam was the secretary. And Veni Madhav took over from Arvindam in 1978.


SWAB had to wait till 1983/84 to gain separate affiliation from the SJFI. During the annual convention of the SJFI in Kolkata, the cheque for the affiliation fee was paid and we were thrilled for being an independent unit affiliated to SJFI. The same year SWAB got up its first ever awards function at the IIM auditorium (Opposite New Indian Express office, Bangalore).


That function helped SWAB realise that the entire sports fraternity of the state was ready to support SWAB both morally and financially. That was a great source of inspiration and from then on SWAB has been coming up with worthy activities. And as HSS had visualised in 1974, the number of sports journalists too increased.


During this period, the wonderful services rendered by S Devanath, M.A. Ponnappa, Anand Philar,Gopal Hegde, Vedam Jaishankar, B.R. Sharan Kumar, S.S. Sreekumar, Sutram Suresh, Satyanarayana (formerly Timesof India, Bangalore) and TP Krishnamurthy (PTI) were mainly responsible for SWAB’s success in almost all its efforts. I consider myself fortunate to have been the president of SWAB for two terms between 1990 and 1997.


It is my duty here to record the fact that there had been spells of inaction during the last 13 or 14 years. Fortunately, such lean periods were not in long spells. The main reason for this inaction has been the working patterns of modern sports journalists. “Let us sit and discuss SWAB one of these days”. We used to suggest quite often during this period. But who would create that DAY?! That has been the problem.


But the SWAB is lucky in getting a set of enthusiastic members at the right juncture to revive SWAB. And these men have never failed. In fact, “Let us revive SWAB with a bang” has been the motto. Hence SWAB is maintaining its prestigious status in the State and national sports circles. It has always been young and enthusiastic persons who served SWAB with commitment and honesty. And always these youngsters get the needed encouragement from the senior members of SWAB. That’s the mantra of SWAB that would keep it good stead for many more years to come.



-P.R. VISWANATHAN

"ಸ್ವ್ಯಾಬ್"ಗೆ 35 ವರ್ಷಗಳ ಸಂಭ್ರಮ...!


ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ 35ನೇ ವರ್ಷದ ಸಂಭ್ರಮದ ಈ ಸಂದರ್ಭದಲ್ಲಿ "ಪ್ರಜಾವಾಣಿ"ಯ ಸಹಾಯಕ ಸಂಪಾದಕರಾದ ಶ್ರೀ. ಎಂ.ಎ. ಪೊನ್ನಪ್ಪ ಅವರು "ಸ್ವ್ಯಾಬ್ ರಿಪೋರ್ಟರ್ಸ್"ಗೆ ವಿಶೇಷವಾದ ಲೇಖನವನ್ನು ಬರೆದಿದ್ದಾರೆ. "ಸ್ವ್ಯಾಬ್" ಇತಿಹಾಸದ ಪುಟಗಳನ್ನು ತಿರುವಿಹಾಕುವ ಪ್ರಯತ್ನವಾಗಿದೆ ಈ ಲೇಖನ.


ಇದು ನಿಮಗೆ ತಿಳಿದಿರಲಿಕ್ಕಿಲ್ಲ! ಈ ವರ್ಷವು ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಹುಟ್ಟಿದ 35ನೇ ವರ್ಷಾಚರಣೆಯ ಹರ್ಷಪೂರ್ಣವಾದ ವರ್ಷ. 35 ವರ್ಷಗಳಷ್ಟು ದೊಡ್ಡ ಇತಿಹಾಸ ಹೊಂದಿರುವ "ಸ್ವ್ಯಾಬ್"ಗೆ ಹೊಸದೊಂದು ಕಳೆ ಹಾಗೂ ಉತ್ಸಾಹ ನೀಡುವ ಅಗತ್ಯ ಈಗ ಎದುರಾಗಿದೆ. ಒಂದಿಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಹೊಸದೊಂದು ಸ್ವರೂಪವನ್ನು ನೀಡುವ ಅಗತ್ಯವೂ ಇದೆ.

"ಸ್ವ್ಯಾಬ್" ಎನ್ನುವ ಕ್ರೀಡಾ ಬರಹಗಾರರ ಸಂಘವು ತನ್ನದೇ ಆದ ವಿಶೇಷತೆ ಹೊಂದಿದೆ. ಈ ಸಂಘವು ದೇಶದಲ್ಲಿಯೇ ಅತ್ಯಂತ ಹಳೆಯದಾದ ಕ್ರೀಡಾ ಪತ್ರಕರ್ತರ ಸಂಘಗಳಲ್ಲಿ ಒಂದೆನಿಸಿದೆ. "ಸ್ವ್ಯಾಬ್" ಕನ್ನಡ ನಾಡಿನ ಕ್ರೀಡಾ ಪತ್ರಿಕೋದ್ಯಮದ ಮಹಾನ್ ಇತಿಹಾಸದ ಭಾಗವಾಗಿ ಬೆಳೆದು ನಿಂತು, ಹೆಮ್ಮೆಯ ಗರಿಯನ್ನು ತನ್ನ ಕಿರೀಟದ ಸಿಂಗಾರವಾಗಿಸಿಕೊಂಡಿದೆ.


ಈ ಸಂಸ್ಥೆ ಸ್ಥಾಪನೆ ಮಾಡಿದ್ದು ಕನ್ನಡ ನಾಡಿನ ಎಲ್ಲಾ ಕ್ರೀಡಾ ಪತ್ರಕರ್ತರು ಒಂದು ವೇದಿಕೆಯಲ್ಲಿ ಸೇರಬೇಕು ಎನ್ನುವ ಉದ್ದೇಶದಿಂದ. ಆಗ ಟೆಲಿವಿಷನ್ ಮಾಧ್ಯಮವು ಅಷ್ಟೊಂದು ದೊಡ್ಡದಾಗಿ ಬೆಳೆದಿರಲಿಲ್ಲ. ಆದ್ದರಿಂದ ಆಗ ಕೇವಲ ಕೆಲವು ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಮಾಡುವ ಕ್ರೀಡಾ ಉಪ ಸಂಪಾದಕರು, ಸಂಪಾದಕರು ಹಾಗೂ ವರದಿಗಾರರು ಮಾತ್ರ ಇದರ ಅಡಿಯಲ್ಲಿ ಒಂದಾಗಿದ್ದರು. ಆಗ ಬೆಂಗಳೂರಿನಲ್ಲಿ ಕ್ರೀಡಾಕೂಟಗಳನ್ನು ಛಾಯಾಗ್ರಹಣ ಮಾಡಲು ಬರುತ್ತಿದ್ದ ಫೋಟೊಗ್ರಾಫರುಗಳ ಸಂಖ್ಯೆಯೂ ತೀರ ಕಡಿಮೆ ಇತ್ತು. ಆದ್ದರಿಂದ ಅವರಿಗೂ "ಸ್ವ್ಯಾಬ್" ತನ್ನ ಛತ್ರಛಾಯೆಯಲ್ಲಿ ಅವಕಾಶ ಮಾಡಿಕೊಟ್ಟಿತ್ತು ಎನ್ನುವುದನ್ನು ಮರೆಯುವಂತಿಲ್ಲ.


ಆ ಕಾಲದಲ್ಲಿ ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಮಾತ್ರ ಕ್ರೀಡಾ ವರದಿಗಾರಿಕೆಯು ಒಂದು ಪ್ರತ್ಯೇಕ ವಿಭಾಗವಾಗಿತ್ತು. ಆದರೂ ಕೆಲವು ದೇಶಿ ಭಾಷೆಯ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರು ಇದ್ದರು. ಆದರೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಇದ್ದಂತೆ ಕ್ರೀಡಾ ವಿಭಾಗ ಎನ್ನುವುದು ಪ್ರತ್ಯೇಕವಾಗಿ ಇರಲಿಲ್ಲ. ಆದ್ದರಿಂದ ದೇಶಿ ಭಾಷೆಯ ವರದಿಗಾರರು ಇತರ ವಿಷಯಗಳ ಜೊತೆಗೆ ಕ್ರೀಡಾ ವರದಿಗಾರಿಕೆಯನ್ನು ಮಾಡಿಕೊಂಡು ಬಂದಿದ್ದರು. ಆದರೆ ಆಗಲೂ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉಪ ಸಂಪಾದಕರು ಹಾಗೂ ವರದಿಗಾರರು ಕ್ರೀಡಾ ವರದಿಗಾರಿಗೆಯಲ್ಲಿ ಆಸಕ್ತಿ ಹೊಂದಿದವರು "ಸ್ವ್ಯಾಬ್" ಅಂಗವಾಗಲು ಉತ್ಸಾಹ ತೋರಿದ್ದರು.


ಬಾಷಾವಾರು ಪತ್ರಿಕೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕ್ರೀಡೆಗೆ ಪ್ರತ್ಯೇಕವಾಗಿ ಕ್ರೀಡಾ ಪುಟವನ್ನು ಹೊರತಂದಿದ್ದ "ಪ್ರಜಾವಾಣಿ" ದಿನ ಪತ್ರಿಕೆಯ ಕ್ರೀಡಾ ವರದಿಗಾರರು ಹಾಗೂ ಉಪ ಸಂಪಾದಕರು ಮತ್ತು ಕ್ರೀಡಾ ಸಂಪಾದಕರು "ಸ್ವ್ಯಾಬ್" ಚಟುವಟಿಕೆಯಲ್ಲಿ ವಹಿಸಿದ ಪಾತ್ರ ಹಿರಿದು. ವಿಶೇಷವೆಂದರೆ ಇದೇ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಕ್ರೀಡಾ ಸಂಪಾದಕರ ಕಲ್ಪನೆಯ ಸಾಕಾರ ರೂಪವೇ "ಸ್ವ್ಯಾಬ್".

ಅಂದು "ಪ್ರಜಾವಾಣಿ"ಯಲ್ಲಿ ಕ್ರೀಡಾ ಸಂಪಾದಕರಾಗಿದ್ದು ಎಚ್.ಎಸ್. ಸೂರ್ಯನಾರಾಯಣ (ಸೂರಿ). ಅವರ ಕನಸಿನ ಫಲವಾಗಿಯೇ ಕರ್ನಾಟಕದಲ್ಲಿ ಉದಯವಾಯಿತು ಕ್ರೀಡಾ ಬರಹಗಾರರ ಸಂಘ. ಇದು ಸ್ಥಾಪನೆಯಾಗಿದ್ದು 1975ರಲ್ಲಿ. ಮೊಟ್ಟ ಮೊದಲ ಸಭೆ ನಡೆದಿದ್ದು ಬೆಂಗಳೂರಿನ "ಏರ್ ಲೈನ್ಸ್ ಹೊಟೇಲ್" ಆವರಣದಲ್ಲಿ. ಅದೊಂದು ಸಹಜ ಚರ್ಚೆಯ ವೇದಿಕೆಯಂತೆ ಆಗ ಕಾಣಿಸಿತ್ತು. ಆದರೆ ಆನಂತರ ಅದಕ್ಕೊಂದು ಸ್ವರೂಪವೂ ದೊರೆತು "ಸ್ವ್ಯಾಬ್" ಎನ್ನುವ ಸತ್ವವುಳ್ಳ ಸಂಘಟನೆಯಾಗಿ ಬೆಳೆದು ನಿಂತಿತು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅಂದರೆ 1970ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಕ್ರಿಕೆಟ್ ಟೆಸ್ಟ್ ನಡೆದಾಗ ಕ್ರೀಡಾ ಬರಹಗಾರರ ಸಂಘ ಸ್ಥಾಪನೆ ಮಾಡುವ ಯೋಚನೆಯು ಮೊಳಕೆಯೊಡಿದಿತ್ತು. "ಸೂರಿ" ಅವರು ಇಂಥದೊಂದು ಸಂಘವನ್ನು ಕಟ್ಟುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಆಗ ಕರ್ನಾಟಕದ ಕ್ರೀಡಾ ವರದಿಗಾರಿಕೆ ಕ್ಷೇತ್ರದಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಪತ್ರಕರ್ತರು. ವಿಶೇಷವೆಂದರೆ ಮೊದಲ ಬಾರಿಗೆ ಕ್ರೀಡಾ ಬರಹಗಾರರ ಸಂಘಟನೆಯನ್ನು ಕಟ್ಟುವ ಯೋಚನೆ ಮಾಡಿದಾಗ ಅಲ್ಲಿ ಚರ್ಚೆಗೆ ಇದ್ದವರು ಕೇವಲ ಆರು ಮಂದಿ ಮಾತ್ರ.


"ಪ್ರಜಾವಾಣಿ"ಯ ಎಚ್.ಎಸ್. ಸೂರ್ಯನಾರಾಯಣ, ಎಸ್. ದೇವನಾಥ್, ದಾಸಪ್ಪ, ಡಿ.ಎಚ್. ಶ್ರೀನಿವಾಸ್, "ಪ್ರಜಾವಾಣಿ" ಕಡೆಗೆ ಬರುವ ಯೋಚನೆ ಮಾಡಿದ್ದ "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, "ಪ್ರಜಾಮತ"ದಲ್ಲಿ ಅಂಕಣಕಾರರಾಗಿದ್ದ ಸಿದ್ದೇಗೌಡ (ಜಾನುಪ್ರಿಯ), "ಸಂಯುಕ್ತ ಕರ್ನಾಟಕ"ದಲ್ಲಿ ಉಪ ಸಂಪಾದಕರಾಗಿದ್ದು ಕ್ರೀಡಾ ವರದಿ ಬರೆಯುವಲ್ಲಿ ಆಸಕ್ತಿ ಹೊಂದಿದ್ದ ಪಿ.ಸಿ.ಅಪ್ಪಾಜಿ ಹಾಗೂ "ಲೋಕವಾಣ" ಯಲ್ಲಿ ಅರೆಕಾಲಿಕ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ ಅವರು ಕ್ರೀಡಾ ಪತ್ರಕರ್ತರಿಗಾಗಿ ಒಂದು ಸಂಘ ಕಟ್ಟಬೇಕೆನ್ನುವ ಉತ್ಸಾಹ ತೋರಿದ್ದರು.


ಆದರೆ ಅಂದುಕೊಂಡಷ್ಟು ಬೇಗ ಸಂಘವನ್ನು ಕಟ್ಟುವ ಕೆಲಸ ಆಗಲಿಲ್ಲ. ಅದು ಸಾದ್ಯವಾಗಿದ್ದು ಐದು ವರ್ಷಗಳ ನಂತರ ಅಂದರೆ 1975ರಲ್ಲಿ. ಆ ಹೊತ್ತಿಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಕ್ರೀಡಾ ಬರಹಗಾರರು ಕಾಣಿಸಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವಂಥ ಕ್ರೀಡಾ ವರದಿಗಾರಿಗೆ ತಮ್ಮ ಸಾಮರ್ಥ್ಯವನ್ನೂ ತೋರಿದ್ದರು. 1975ರಿಂದ 80ರ ಅವಧಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗೆ ಭಾರಿ ಸಂಖ್ಯೆಯಲ್ಲಿ ಯುವ ಕ್ರೀಡಾ ಪತ್ರಕರ್ತರು ಸೇರಿದರು. ಇವರೊಂದಿಗೆ ಹಳಬರು ಸೇರಿಕೊಂಡು 1975ರಲ್ಲಿ ಸಂಘ ರಚನೆ ಮಾಡಲಾಯಿತು.


1975ರಲ್ಲಿ ಸಂಘ ಸ್ಥಾಪನೆ ಆದಾಗ "ಡೆಕ್ಕನ್ ಹೆರಾಲ್ಡ್" ಇಂಗ್ಲಿಷ್ ಪತ್ರಿಕೆಯಲ್ಲಿ ಲೆಸ್ಲಿ ವಿಲ್ಸನ್, ಆರ್. ಅರವಿಂದಮ್, ಜಿ. ಭಗವಾನ್, ಆನಂದ್ ಫಿಲಾರ್, ಎನ್.ಎಸ್. ಕೃಷ್ಣಸ್ವಾಮಿ, ಡೆಡ್ಲಿ ಪೆರಿರಾ, "ಪ್ರಜಾವಾಣಿ" ಕನ್ನಡ ಪತ್ರಿಕೆಯ ಎಚ್.ಎಸ್. ಸೂರ್ಯನಾರಾಯಣ, ಡಿ.ಎಚ್. ಶ್ರೀನಿವಾಸ್ (ಡಚ್ಚ), ಪಿ.ಸಿ. ಅಪ್ಪಾಜಿ, "ಸಂಯುಕ್ತ ಕರ್ನಾಟಕ"ದ ಎಸ್. ದೇವನಾಥ್ (ಆನಂತರ "ಪ್ರಜಾವಾಣಿ" ಸೇರಿದರು), "ಲೋಕವಾಣಿ" ಪತ್ರಿಕೆಯಲ್ಲಿದ್ದ ಎಂ.ಎ. ಪೊನ್ನಪ್ಪ, "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, ಎ.ಆರ್. ಆನಂದ್, "ಆಕಾಶವಾಣಿ"ಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಎಸ್. ಪುರುಷೋತ್ತಮ್, "ಜನವಾಣಿ" ಮತ್ತು "ಪ್ರಜಾಮತ"ದ ಸಿದ್ದೇಗೌಡ (ಜಾನುಪ್ರಿಯ), "ಇಂಡಿಯನ್ ಎಕ್ಸ್ ಪ್ರೆಸ್" ಇಂಗ್ಲಿಷ್ ಪತ್ರಿಕೆಯ ವೇಣಿ ಮಾಧವ್, ಜಿ. ರುದ್ರ, ಶ್ರೀನಿವಾಸ್, ಡೆಂಜಿಲ್, "ಹಿಂದು" ಪತ್ರಿಕೆಯಲ್ಲಿ ಕೆಸಲ ಮಾಡುತ್ತಿದ್ದ ಪಿ.ಆರ್. ವಿಶ್ವನಾಥ್, "ಸಲಾರ್" ಪತ್ರಿಕೆಯ ಅಲಿ ಹಫೀಜ್, ಮುನೀರ್ ಸೇಠ್, "ಪಿ.ಟಿ.ಐ." ವರದಿಗಾರರಾಗಿದ್ದ ಇ. ರಾಘವನ್ ಅವರು "ಸ್ವ್ಯಾಬ್" ಎನ್ನುವ ದೊಡ್ಡ ಸಂಘವನ್ನು ಕಟ್ಟಲು ಅಡಿಗಲ್ಲು ಇಟ್ಟವರು.


1982ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಹಾಗೂ ಹಿರಿಯ ಕ್ರೀಡಾ ಪತ್ರಕರ್ತರು "ಸ್ವ್ಯಾಬ್" ಸಂಘಟನೆಯಲ್ಲಿ ತಮ್ಮ ಹೆಸರು ನೋಂದಾಯಿಸಿದರು. ಆನಂತರ ಅವರಲ್ಲಿ ಕೆಲವರು ಬೇರೆ ಬೇರೆ ಊರುಗಳಿಗೆ ತೆರಳಿದರು. ಆ ಕಾಲದಲ್ಲಿ "ಸ್ವ್ಯಾಬ್" ಪ್ರವಾಹದಲ್ಲಿ ಸೇರಿಕೊಂಡಿದ್ದು ಬಿ.ಆರ್. ಶರಣ್ ಕುಮಾರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ವೇದಂ ಜೈಶಂಕರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ರಾಜನ್ ಬಾಲಾ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್), ಸತೀಶ್ ಪಾಲ್, ಸುರೇಶ್ ಪಾಲ್, ಡಿ. ರವಿಕುಮಾರ್ (ಡೆಕ್ಕನ್ ಹೆರಾಲ್ಡ್), ರೂಪಾ ರಾವ್ (ಇಂಡಿಯನ್ ಎಕ್ಸ್ಪ್ರೆಸ್), ಕಲ್ಯಾಣ್ ಅಶೋಕ್ (ದಿ ಹಿಂದೂ), ಎಚ್.ಎಸ್. ಮಂಜುನಾಥ್ (ಡೆಕ್ಕನ್ ಹೆರಾಲ್ಡ್), ಸಿ. ಗೋಪಾಲ ಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), ಗೋಪಾಲ ಕೃಷ್ಣ ಹೆಗಡೆ (ಸಂಯುಕ್ತ ಕರ್ನಾಟಕ, ಪ್ರಜಾವಾಣಿ), ಸುರೇಶ್ ಮೆನನ್ (ಡೆಕ್ಕನ್ ಹೆರಾಲ್ಡ್), ಎಸ್.ಎಸ್. ಶ್ರೀಕುಮಾರ್ (ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಹೆರಾಲ್ಡ್), ವಿಲ್ಸನ್ ಜೂನಿಯರ್ (ಡೆಕ್ಕನ್ ಹೆರಾಲ್ಡ್), ಶ್ಯಾಮ್ (ಡೆಕ್ಕನ್ ಹೆರಾಲ್ಡ್), ಪಟ್ನಂ ಅನಂತ ಪದ್ಮನಾಭ (ಪ್ರಜಾವಾಣಿ), ಕಲ್ಯಾಣ್ ಆನಂದ್ (ಡೆಕ್ಕನ್ ಹೆರಾಲ್ಡ್), ವಿಜಯ್ ಮೃತ್ಯುಂಜಯ (ಡೆಕ್ಕನ್ ಹೆರಾಲ್ಡ್), ಇಕ್ರಂ ಖಾನ್, ಚೆರಿಯನ್ ಥಾಮಸ್ (ಟೈಮ್ಸ್ ಆಫ್ ಇಂಡಿಯಾ).


ಆನಂತರದ ವರ್ಷಗಳಲ್ಲಿ ದಿನಪತ್ರಿಕೆಗಳ ನಡುವೆ ಪ್ರಸಾರ ಸಂಖ್ಯೆ ಹೆಚ್ಚಿಸಲು ಪ್ರಬಲ ಪೈಪೋಟಿ ನಡೆಯಿತು. ಇದರ ಪರಿಣಾಮವಾಗಿ ಅನೇಕ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚತೊಡಗಿತು. 1990ರ ಸುಮಾರಿಗೆ ಹೊಸ ತಲೆಮಾರಿನವರು ಭಾರಿ ಸಂಖ್ಯೆಯಲ್ಲಿ ಕ್ರೀಡಾ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದರು. ಕೆಲವರು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಇಲ್ಲಿ ವಿವಿಧ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡತೊಡಗಿದರು. ರಾಜ್ಯದ ವಿವಿಧ ಭಾಗದಿಂದಲೂ ಕ್ರೀಡಾ ವರಿದಿಗಾರರು ಉದ್ಯಾನನಗರಿಗೆ ಬಂದರು.


ಆ ಒಂದು ದಶಕದಲ್ಲಿ ಕ್ರೀಡಾ ವರದಿಗಾರರು ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಹೆಚ್ಚಾದರು. ಅದೊಂದು ಅಚ್ಚರಿಯೂ ಆಗಿತ್ತು. ಕ್ರೀಡಾ ವರದಿಗಾರರ ಸಂಖ್ಯೆ ಹೆಚ್ಚಿದಂತೆ "ಸ್ವ್ಯಾಬ್" ಸದಸ್ಯರ ಸಂಖ್ಯಾ ಬಲವು ಅಧಿಕವಾಯಿತು. ಅದೊಂದು ಪರಿವರ್ತನೆಯ ಕಾಲವೇ ಸರಿ. ಒಂದೆಡೆ ಪತ್ರಿಕೆಗಳ ನಡುವೆ ಸ್ಪರ್ಧೆ ಬಲವಾಗಿ ಕ್ರೀಡಾ ವರದಿಗಾರಿಕೆಗೆ ಒತ್ತು ಸಿಗುತ್ತಿದ್ದಂತೆಯೇ, ಇನ್ನೊಂದೆಡೆ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚಿ "ಸ್ವ್ಯಾಬ್" ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಯಿತು.


"ಕನ್ನಡ ಪ್ರಭ"ದ ಶ್ರೀಕರ್, "ದಿ ಹಿಂದೂ" ಪತ್ರಿಕೆಯ ಅವಿನಾಶ್ ನಾಯರ್, "ಪ್ರಜಾವಾಣಿ"ಯ ಪಿ.ಜಿ. ಪೂಣಚ್ಚ, ನಾಗೇಶ್ ಶೆಣೈ, ಅಮೃತ್ ಜೋಗಿ, ಶಿವಕುಮಾರ್ ಕಣಸೋಗಿ, ಸತೀಶ್ ಚಪ್ಪರಿಕೆ, ಡಿ.ವಿ. ಗರುಡ, ವಿಶಾಖ ಎನ್., ಸಿ.ಆರ್.ನವೀನ್, ("ಉದಯವಾಣಿ", ಆನಂತರ "ಪ್ರಜಾವಾಣಿ"), "ಪಿ.ಟಿ.ಐ." ವರದಿಗಾರ ಟಿ.ಪಿ. ಕೃಷ್ಣಮೂರ್ತಿ. "ಯು.ಎನ್.ಐ." ವರದಿಗಾರ ವಿಜಯ ಕುಮಾರ್, "ಸಂಯುಕ್ತ ಕರ್ನಾಟಕ"ದ ಎಚ್.ಕೆ. ವಿಶ್ವನಾಥ್, ಶ್ಯಾಮ ಸುಂದರ್, "ಕನ್ನಡ ಪ್ರಭ"ದ ಸಿ.ಆರ್. ಕೃಷ್ಣಮೂರ್ತಿ, ಡಿ.ಎಂ. ಭಟ್, ಸಿ. ಗೋಪಾಲಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), "ಡೆಕ್ಕನ್ ಹೆರಾಲ್ಡ್" ಪತ್ರಿಕೆಯ ಜೋಸೆಫ್ ಹೂವರ್ (ಇಂಡಿಯನ್ ಎಕ್ಸ್ ಪ್ರೆಸ್, ಆನಂತರ ಡೆಕ್ಕನ್ ಹೆರಾಲ್ಡ್), ಕೆ. ರಾಜೀವ್, ಗೀತಾ ರಾಮಕೃಷ್ಣ, ಆರ್. ಸತ್ಯ, ಆರ್. ಕೌಶಿಕ್, ವಿಜಯ್ ಮೈಕಲ್ ರಾಜ್, ಜಾನ್ ವರ್ಗಿಸ್, ನಾರಾಯಣ ಸ್ವಾಮಿ,, ಜಿ. ಕೃಷ್ಣನ್, ಪ್ರಜ್ವಲ್ ಹೆಗಡೆ (ಈಗ ಟೈಮ್ಸ್ ಆಫ್ ಇಂಡಿಯ), ಸತೀಶ್ ವಿಶ್ವನಾಥ್, ರವಿ ಚಕ್ರವರ್ತಿ (ಡೆಕ್ಕನ್ ಹೆರಾಲ್ಡ್, ಡಿ.ಎನ್.ಎ.), ರವಿ ಶಂಕರ್ (ದಿ ಹಿಂದೂ), ಮಗೇಶ್ವರನ್, ಡೇವಿಡ್, ಸತ್ಯ (ಇಂಡಿಯನ್ ಎಕ್ಸ್ ಪ್ರೆಸ್), ಕ್ರಿಸ್ಟೋಫರ್ ಹೂವರ್ (ಏಷ್ಯನ್ ಏಜ್), ಈಶ್ವರ್ ರಾವ್ (ದೂರದರ್ಶನ), ಸೂತ್ರಮ್ ಸುರೇಶ್ (ಟೈಮ್ಸ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯ), ವಿಜಯ ಕರ್ನಾಟಕದ ಜಗನ್ನಾಥ್, ಆನಂದ್ ಇವರೆಲ್ಲರೂ "ಸ್ವ್ಯಾಬ್" ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ರಾಘವೇಂದ್ರ ಗಣಪತಿ ಅವರೂ ಸ್ವಾಬ್ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು. 2000ದಿಂದ ಸ್ವಾಬ್ ಸದಸ್ಯರಾಗಿರುವ ರಾಘವೇಂದ್ರ ಗಣಪತಿ ಅವರು 1999ರಲ್ಲಿ ಸಂಯುಕ್ತ ಕರ್ನಾಟಕ ಸೇರಿದಾಗಿನಿಂದ ಕ್ರೀಡಾ ವರದಿಗಾರರಾಗಿದ್ದಾರೆ. "ಉದಯವಾಣಿ", "ಉಷಾಕಿರಣ", "ಟೈಮ್ಸ್ ಆಫ್ ಇಂಡಿಯಾ ಕನ್ನಡ" ಮತ್ತೀಗ ಉದಯವಾಣಿಯಲ್ಲಿ ಕ್ರೀಡಾ ಸಂಪಾದಕರಾಗಿ ಪ್ರಭಾವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೀಗೆ ಎಲ್ಲ ನಿಟ್ಟಿನಿಂದ ಹರಿದುಬಂದ ಕ್ರೀಡಾ ವರದಿಗಾರರ ಪ್ರವಾಹವು "ಸ್ವ್ಯಾಬ್" ಎನ್ನುವ ಆಣೆಕಟ್ಟನ್ನು ಭರ್ತಿ ಆಗಿಸಿತು. ಇದರಿಂದಾಗಿ ಚಟುವಟಿಕೆಗಳು ಚುರುಕು ಪಡೆದವು. ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಶಿಷ್ಟವಾದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲು ಸಾಧ್ಯವಾಯಿತು. ಆದರೆ ನಡುವೆ ಅನೇಕ ಅಡಚಣೆಗಳೂ ಇದ್ದವು. ಆದ್ದರಿಂದ ಕೆಲವು ಕಾಲ ಇಂಥ ಚಟುವಟಿಕೆಗಳು ನಡೆಯುವುದು ಕಷ್ಟವೂ ಆಯಿತು.


2000ನೇ ವರ್ಷದ ಈಚೆಗೆ ಕ್ರೀಡಾ ಪತ್ರಕರ್ತರ ಸಂಖ್ಯೆಯು ಇನ್ನಷ್ಟು ಜಾಸ್ತಿಯಾಯಿತು. "ಪ್ರಜಾವಾಣಿ"ಯ ಜಿ.ಸುಭಾಷ್ ಚಂದ್ರ, ಮಹಮದ್ ನೂಮಾನ್, ಕೆ. ಓಂಕಾರ ಮೂರ್ತಿ, "ಉದಯವಾಣಿ"ಯ ಪರಮೇಶ್ವರ ಗುಂಡ್ಕಲ್, ಮಲ್ಲಿಕಾಚರಣ್, ಸನತ್, ಪರಶುರಾಮ್, "ಕನ್ನಡ ಪ್ರಭ"ದ
ಜಿ.ಎಸ್.ಬಿ.ಅಗ್ನಿಹೋತ್ರಿ (ಕಳೆದ 2 ತಿಂಗಳಿಂದ ಸುವರ್ಣ ನ್ಯೂಸ್), ಸೋಮಶೇಖರ ಪಡುಕೆರೆ, "ಡೆಕ್ಕನ್ ಕ್ರಾನಿಕಲ್"ನ ಮನುಜಾ ವೀರಪ್ಪ, ಸಹನ್ ಬಿದ್ದಪ್ಪ, ಅಭಿಷೇಕ್, "ಡಿ.ಎನ್.ಎ."ನ ನಂದಿನಿ ಕುಮಾರ್, ವಿವೇಕ್ ಫಡ್ನೀಸ್, "ವಿಜಯ ಕರ್ನಾಟಕ"ದ ಎಂ.ಆರ್. ದಿಂಡಿಲಕೊಪ್ಪ, ರಮೇಶ್, ವಿರೂಪಾಕ್ಷ, "ಬೆಂಗಳೂರು ಮಿರರ್" ಪತ್ರಿಕೆಯ ಸುನಿಲ್ ಸುಬ್ಬಯ್ಯ, "ದಿ ಹಿಂದೂ"ನ ಕೆ.ಸಿ. ವಿಜಯಕುಮಾರ್, "ಟೈಮ್ಸ್ ಆಫ್ ಇಂಡಿಯಾ"ದ ಅಭಯ್ ಜೋಸ್, "ಡೆಕ್ಕನ್ ಹೆರಾಲ್ಡ್"ನ ಸಿಡ್ನಿ, ಉನ್ನಿ ಕೃಷ್ಣನ್, ರೋಷನ್, ಮಧು ಜವಳಿ, ಜೋಸಿ ಸ್ಯಾಮ್ಯುಯಲ್, ದೀಪಕ್...ಹೀಗೆ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಸಾಗಿದೆ.

1982ರಿಂದ 2000ದವರೆಗೆ ಕ್ರೀಡಾ ಬರಹಗಾರರ ಸಂಘದ ಚುನಾವಣೆ ಮತ್ತು ಕಾರ್ಯಚಟುವಟಿಕೆ ಬಿರುಸಾಗಿ ಸಾಗತ್ತು. 1990ರಲ್ಲಿ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ಕ್ಕೆ ನೋಂದಣಿಯಾದ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಅನೇಕ ಬಾರಿ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಗಳನ್ನೂ ನಡೆಸಿತು. ಅಷ್ಟೇ ಅಲ್ಲ ಎಸ್.ಜೆ.ಎಫ್.ಐ. ವಾರ್ಷಿಕ ಸಭೆಗಳ ಆತಿಥ್ಯವನ್ನೂ ವಹಿಸಿಕೊಂಡಿತ್ತು. ಆನಂತರ ಚಟುವಟಿಕೆ ಸ್ವಲ್ಪ ಕಡಿಮೆ ಆಗಿದ್ದು ಬೇಸರ. ಆದರೂ ಈಗ ಸಾಕಷ್ಟು ಯುವಕರು "ಸ್ವ್ಯಾಬ್"ನಲ್ಲಿ ಇದ್ದಾರೆ. ಅವರೆಲ್ಲ ಈ ಸಂಘಟನೆಗೆ ಹೊಸ ಚೈತನ್ಯವನ್ನು ನೀಡಲು ಸಾಧ್ಯ.


ಟೆಲಿವಿಷನ್ ಅಬ್ಬರ ಇಲ್ಲದ ಕಾಲದಲ್ಲಿ ಆರಂಭವಾಗಿದ್ದ "ಸ್ವ್ಯಾಬ್"ನಲ್ಲಿ ಆಗ ಟೆಲಿವಿಷನ್ ವರದಿಗಾರರಿಗೆ ಹಾಗೂ ಇಂಟರ್ ನೆಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರೀಡಾ ಪತ್ರಕರ್ತರಿಗೆ ಅವಕಾಶ ನೀಡಬೇಕೆ-ಬೇಡವೇ ಎನ್ನುವ ಸ್ಪಷ್ಟ ಯೋಚನೆ ಮಾಡಿರಲಿಲ್ಲ. 2000ದಿಂದ ಈಚೆಗೆ ಈ ಕುರಿತು ಬಿರುಸಾದ ಚರ್ಚೆ ನಡೆಯುತ್ತ ಬಂದಿದೆ. ಅನೇಕ ಬಾರಿ ಈ ವಿಷಯವು "ಸ್ವ್ಯಾಬ್" ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯೂ ಆಗಿದೆ. ಆದರೆ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅನೇಕ ಬಾರಿ ಹಿರಿಯ ಕ್ರೀಡಾ ಪತ್ರಕರ್ತರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದ್ದರಿಂದ ಆಗಿನಿಂದಲೂ ಈ ವಿಷಯವು ನೆನೆಗುದಿಗೆ ಬಿದ್ದಿದೆ.


ಈಗ ಈ ವಿಷಯವನ್ನು ಮತ್ತೆ ಚರ್ಚೆ ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ಹೊಸ ಪ್ರಸ್ತಾವವನ್ನು ತಂದು ಟೆಲಿವಿಷನ್ ಕ್ರೀಡಾ ವರದಿಗಾರರನ್ನು ಪ್ರತ್ಯೇಕವಾದ ಒಂದು ಘಟಕವನ್ನು ಮಾಡಿ "ಸ್ವ್ಯಾಬ್" ಚಟುವಟಿಕೆಗೆ ಪೂರಕವಾಗಿ ಇರುವಂತೆ ಮಾಡಲು ಸಾಧ್ಯವಾಗಬಹುದೇ ಎನ್ನುವುದು ಚರ್ಚೆ ಆಗಬೇಕಾಗಿದೆ. ಅದು ಹೊಸ ತಲೆಮಾರಿನ ಕ್ರೀಡಾ ಪತ್ರಕರ್ತರು ಯೋಚಿಸಿ ತೀರ್ಮಾನ ಕೈಗೊಳ್ಳುವಂಥ ವಿಷಯ. ಆದರೆ ಈಗ ಇರುವ "ಸ್ವ್ಯಾಬ್" ನಿಯಮಗಳ ಪ್ರಕಾರ ಕ್ರೀಡಾ ಬರಹಗಾರರ ಹೊರತಾಗಿ ಬೇರೆಯವರಿಗೆ ಅವಕಾಶವಿಲ್ಲ. ಆದರೆ ಒಂದು ಪೂರಕ ಘಟಕವಾಗಿ ಟೆಲಿವಿಷನ್ ಹಾಗೂ ಇಂಟರ್ ನೆಟ್ಗಳ ಕ್ರೀಡಾ ವರದಿಗಾರರು ಹಾಗೂ ಬರಹಗಾರರನ್ನು ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಲು ಯೋಚಿಸಬಹುದು. ಆದರೆ ಇದಕ್ಕೆ "ಸ್ವ್ಯಾಬ್" ಸರ್ವಸದಸ್ಯರ ಸಭೆಯ ಒಪ್ಪಿಗೆ ದೊರೆಯುವುದು ಅಗತ್ಯವಾಗಿದೆ.


ಇಂಥದೊಂದು ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೂ, ಟೆಲಿವಿಷನ್ ಹಾಗೂ ಇಂಟರ್ ನೆಟ್ಗಳ ಕ್ರೀಡಾ ವರದಿಗಾರರು ಹಾಗೂ ಬರಹಗಾರರಿಗೆ "ಸ್ವ್ಯಾಬ್" ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವುದು ಸಾಧ್ಯವಾಗುವುದಿಲ್ಲ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಪ್ರಸ್ತಾವದೊಂದಿಗೆ "ಸ್ವ್ಯಾಬ್" ಚಟುವಟಿಕೆಯ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಮುಂದಾಗಬಹುದು.


"ಸ್ವ್ಯಾಬ್" ಮಾಜಿ ಅಧ್ಯಕ್ಷನಾದ ನಾನು ಈ ಸಂಘಟನೆಯ ಯಾವುದೇ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧನಾಗಿರುತ್ತೇನೆ. ಯುವ ಕ್ರೀಡಾ ಪತ್ರಕರ್ತರಿಗೆ "ಸ್ವ್ಯಾಬ್" ಚಟುವಟಿಕೆಯನ್ನು ಹೆಚ್ಚಿಸಲು ನನ್ನ ಬೆಂಬಲ ಯಾವಾಗಲೂ ಇರುತ್ತದೆ.

"ಸ್ವ್ಯಾಬ್" ಎಲ್ಲ ಸದಸ್ಯರಿಗೂ ನಮ್ಮ ಈ ಸಂಘಟನೆಯ 35ನೇ ವರ್ಷಾಚರಣೆಯ ಶುಭಾಶಯಗಳು.

ನಿಮ್ಮ ಮಿತ್ರ
ಎಂ.ಎ.ಪೊನ್ನಪ್ಪ
ಸಹಾಯಕ ಸಂಪಾಕರು (ಕ್ರೀಡೆ), "ಪ್ರಜಾವಾಣಿ" ಕನ್ನಡ ದಿನಪತ್ರಿಕೆ

SHREEKUMAR "SJFI" VICE PRESIDENT

SWAB president S.S.Shreekumar was elected as vice president of the Sports Journalists Federation of India (SJFI). R.Kaushik also from SWAB elected as executive committee member.

The annual general meeting of the SJFI re-elected S. Sabanayakan (Kolkata) as president. also re-elected Chandrasekhar P. Sant (Sports Journalists Association of Mumbai as its treasurer. The other office-bearers are: vice-presidents: A. Vinod (Kerala), Gordon D’costa (Mumbai), S.S.Shreekumar (SWAB) and Alak Ghosh (Tripura); joint-secretary: Subodh M. Barua (Assam); executive committee: G.B.Vanamali (Tamil Nadu), R. Kaushik (SWAB), D. Sampath Kumar (Andhra Pradesh), Vikas Pandey (Indore), Anand Naik and Sanjeev Samyal (Mumbai) and Purnendu Chakraborti (Koltaka).

SOUTH ZONE TRIUMPHS


The South Zone cricket team maintained a clean slate to
win the J.K. Bose T20 tournament.

Courtesy THE HINDU

South Zone won the inter-zonal J.K. Bose Twenty20 cricket tournament, winning its third match at the Sports Authority of Goa (SAG) ground at Campal here on Sunday. South beat North to win the trophy after 12 years.

Abhijit Bhadkar was declared the Man-of-the-Match. West Zone finished runner-up, defeating East Zone at the Panjim Gymkhana ground. South Zone's Satish Viswanathan was declared the Player-of-the-Tournament for his consistent performance with the bat.

Abhijit Kulkarni of the Sports Journalists Association of Mumbai (SJAM) beat R. Kaushik of Sports Writers Association of Bangalore in the men's table tennis final.

Nike, Videocon Mobile Phones and ESPN-STAR Sports sponsored the prizes for cricket, table tennis and penalty kicks.

The scores: North Zone 140 for nine in 20 overs (S. Saxena 38 not out, Mallikacharan three for 31, Abhijit Bhadkar two for 25) lost to South Zone 141 for two in 19 overs (Satish Viswanathan 53).

East Zone 102 in 19.5 overs (T. Talukdar 31, A. Kulkarni two for 15, Rahul Dixit two for 23, S. Mayure two for 11) lost to West Zone 103 for five in 10.5 overs (D. Pandey 23, S. Barua three for 37).

Table Tennis: Men: A. Kulkarni (SJAM) bt R. Kaushik (SWAB) 11-4, 9-11, 11-4, 11-7.

"ಲೆಗ್ ಕ್ರಿಕೆಟ್" ಪ್ರದರ್ಶನ ಪಂದ್ಯದ ಕ್ಷಣಗಳು...!


ರಂಜನೆ ನೀಡುವಂಥ ವಿಶಿಷ್ಟವಾದ
ಕ್ರೀಡೆಯಾದ "ಲೆಗ್ ಕ್ರಿಕೆಟ್"
ಪ್ರದರ್ಶನ ಪಂದ್ಯದ ಕ್ಷಣಗಳು.



ಪಂದ್ಯಕ್ಕೆ ಮುನ್ನ ಆಟದ ಯೋಜನೆ ರೂಪಿಸುವಲ್ಲಿ ತಲ್ಲೀನರಾದ ಆಟಗಾರರು.


ಬೌಂಡರಿಲೈನ್ ಫೀಲ್ಡರ್ ಸುತ್ತ ಟೆಲಿವಿಷನ್ ಚಾನಲ್ಲುಗಳ ಕ್ಯಾಮೆರಾದವರ ಕಣ್ಣು...!


"ಸ್ವ್ಯಾಬ್" ತಂಡದ ವಿರುದ್ಧ ಆಡಿದ ದೈಹಿಕ ಶಿಕ್ಷಣ ಶಿಕ್ಷಕರ ತಂಡ.


"ಸ್ವ್ಯಾಬ್" ಕಾರ್ಯದರ್ಶಿ (ಚುನಾಯಿತ) ಡಿ.ವಿ.ಗರುಡ ಹಾಗೂ ನಾಯಕ ಸುನಿಲ್ ಶಿರಸಂಗಿ
ಅವರು ಟಾಸ್ ಮಾಡಲು ಬಂದ ಕ್ಷಣ.


ಪಂದ್ಯದ ಒಂದು ಕ್ಷಣ...!


ಬೌಂಡರಿ ಆಚೆಗೆ ನಿಂತು ಬೌಲಿಂಗ್ (ಅಂಡರ್ ಆರ್ಮ್ ರೋಲಿಂಗ್) ಹೇಗೆ
ಮಾಡುವುದು ಎಂದು ಚಿಂತನೆ.



ಓ... ರನ್ ಔಟ್ ಆಗುವ ಸಾಧ್ಯತೆ; ಬೇಗ ಚೆಂಡು ಕೊಡಿ...!


ಪಂದ್ಯದಲ್ಲಿ ಗೆದ್ದ "ಸ್ವ್ಯಾಬ್" ತಂಡದ ಆಟಗಾರರು.

ಟಿಟಿ: "ಸ್ವ್ಯಾಬ್" ತಂಡಕ್ಕೆ ಫೈನಲ್ ಪಂದ್ಯದಲ್ಲಿ ನಿರಾಸೆ

ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ತಂಡದವರು ಭಾರತ ಕ್ರೀಡಾ ಪತ್ರಕರ್ತರ ಸಂಘ (ಎಸ್.ಜೆ.ಎಫ್.ಐ.) ಆಶ್ರಯದಲ್ಲಿ ಪಣಜಿಯಲ್ಲಿ ಶನಿವಾರ ನಡೆದ ಎ.ಸಿ.ಬಾಲಿ ಟೇಬಲ್ ಟೆನಿಸ್ ಟೂನರ್ಿಯ ಫೈನಲ್ ಪಂದ್ಯದಲ್ಲಿ ನಿರಾಸೆಗೊಂಡು, ರನ್ನರ್ಸ್ ಅಪ್ ಸ್ಥಾನಕ್ಕೆ ಸಮಾಧಾನ ಪಟ್ಟಿತು.

ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ತಂಡವು 1-2ರಲ್ಲಿ ಮುಂಬೈ ಎದುರು ಸೋಲನುಭವಿಸಿತು. ಆರ್.ಕೌಶಿಕ್ ಅವರು ಉತ್ತಮ ಆಟವಾಡಿದರೂ, ಸಿಂಗಲ್ಸ್ ಪಂದ್ಯದಲ್ಲಿ ಗ್ದೆದು, ಡಬಲ್ಸ್ ಪಂದ್ಯದಲ್ಲಿ ನಿರಾಸೆ ಹೊಂದಿದರು.

ಕೌಶಿಕ್ 11-5, 11-6ರಲ್ಲಿ ಗೊರ್ಡಾನ್ ಡಿಕೊಸ್ಟಾ ವಿರುದ್ಧ ಸಿಂಗಲ್ಸ್ ಹಣಾಹಣಿಯಲ್ಲಿ ಯಶ ಪಡೆದರು. ಆದರೆ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಮಲ್ಲಿಕಾಚರಣ್ ಅವರು 9-11, 7-11ರಲ್ಲಿ ಪ್ರದೀಪ್ ವಿಜಯಕರ್ ಎದುರು ನಿರಾಸೆ ಹೊಂದಿದರು. ನಿರ್ಣಾಯಕ ಎನಿಸಿದ ಡಬಲ್ಸ್ ಪಂದ್ಯದಲ್ಲಿ ಮುಂಬೈನ ಗೊರ್ಡಾನ್ ಮತ್ತು ಅಭಿಜಿತ್ ಕುಲಕರ್ಣಿ ಜೋಡಿಯು ಕೌಶಿಕ್ ಹಾಗೂ ಮಲ್ಲಿಕಾಚರಣ್ ಅವರನ್ನು ಸೋಲಿಸಿತು.

ಇಎಸ್ಪಿಎನ್ ಪೆನಾಲ್ಟಿ ಕಿಕ್ ಸ್ಪರ್ಧೆಯ ಫೈನಲ್ ಹಂತದಲ್ಲಿಯೂ ಮುಂಬೈ ತಂಡವು 4-1ರಲ್ಲಿ ಬೆಂಗಳೂರಿನ ತಂಡವನ್ನು ಪರಾಭವಗೊಳಿಸಿತು. ಮೂರನೇ ಸ್ಥಾನವನ್ನು ದೆಹಲಿ ಪಡೆದುಕೊಂಡಿತು.

A.C.Bali TT: Mumbai team champion

Mumbai lifted the A C Bali table tennis team championship for sports journalists by defeating Bangalore 2-1 in the final at the Sports Authority of Goa (SAG) premises in Panaji on Saturday.

Mumbai's Gordon D'Costa and Abhijeet Kulkarni clinched the doubles title with a 11-6 11-7 victory over the Delhi pair of Rakesh Rao and Suresh Kaushik in the final.

Mumbai also won the ESPN Star penalty kicks competition beating Bangalore 4-1 in the summit clash.

Results:


Table tennis: Team Championship (final): Mumbai bt Banglore 2-1 (Gordon D'costa lost to R Kaushik 5-11, 6-11; Pradeep Vijaykar bt Mallikacharan 11-9 11-7; Gordon and Abhijeet bt Kaushik and Mallikacharan 11-6 11-5.

Doubles (final): Abhijeet and Gordon (Mumbai) bt Rakesh Rao and Suresh Kaushik (Delhi) 11-6 11-7.

Singles (semi-finals): Abhijeet Mum) bt Gordon (Mum) 11-5 11-4 11-9 11-6; R Kaushik (Banglore) bt Vijaykar (Mum) 11-8 11-9 9-11 11-8 9-11 8-11 11-9.

ESPN Star Penalty Kicks competition: Pre-quarter-finals: Bangalore Beat Assam 3-1; Tripura beat Hydrabad 4-0; Delhi beat Lucknow 4-2; Chennai beat Indore 3-2. Quarter finals: Banglore beat Nagpur 4-2; Kolkata beat Tripura 5-3; Delhi beat Bihar 3-2; Mumbai beat Chennai 5-3; Semi-finals: Banglore beat Kolkata 4-1; Mumbai beat Delhi 5-2; Final: Mumbai beat Banglore 4-1; 3rd place: Delhi beat kolkata 7-6.

ಲೆಗ್ ಕ್ರಿಕೆಟ್...ವಿಜಯ...!


(From left, Back row): Venkatesh Prasad, Umesh, Guru Kusugal, Subash Chnadra, D. V. Gaurud, Mohammad Nooman, Lingaraju, (Front row)Prashanth, Damodhar, Sunil Sirasangi, Jeevan, Shashidar, K. Omkar Murthy of Sports Writers' Association of Bangalore (SWAB) Team won the Leg Cricket exhibition match against P.T.Teachers team orginised by Karnataka Leg Cricket Association at Jayanagara in Bangalore.

ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಎಸ್.ಡಬ್ಲ್ಯು.ಎ.ಬಿ)ದ ಕ್ರೀಡಾ ವರದಿಗಾರರ ತಂಡವು ಕರ್ನಾಟಕ ರಾಜ್ಯ ಲೆಗ್ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ "ಲೆಗ್ ಕ್ರಿಕೆಟ್" ಪಂದ್ಯದಲ್ಲಿ ಶನಿವಾರ ದೈಹಿಕ ಶಿಕ್ಷಣ ಶಿಕ್ಷಕರ ತಂಡದ ವಿರುದ್ಧ ಎರಡು ರನ್ನುಗಳ ಅಂತರದಿಂದ ವಿಜಯ ಸಾಧಿಸಿತು. (ಎಡದಿಂದ ಬಲಕ್ಕೆ; ಹಿಂದಿನ ಸಾಲು) ವೆಂಕಟೇಶ್ ಪ್ರಸಾದ್, ಉಮೇಶ್, ಗುರು ಕುಸುಗಲ್, ಜಿ.ಸುಭಾಷ್ ಚಂದ್ರ, ಡಿ.ವಿ.ಗರುಡ, ಮಹಮ್ಮದ್ ನೂಮಾನ್, ಲಿಂಗರಾಜು, (ಮುಂದಿನ ಸಾಲು) ಪ್ರಶಾಂತ್, ದಾಮೋದರ್, ಸುನಿಲ್ ಶಿರಸಂಗಿ, ಜೀವನ್, ಶಶಿಧರ್ ಗರ್ಗೇಶ್ವರಿ, ಕೆ.ಓಂಕಾರ ಮೂರ್ತಿ.

ಜೆ.ಕೆ.ಬೋಸ್ ಕ್ರಿಕೆಟ್: ಅಭಿಷೇಕ್ ಭಾಡ್ಕರ್ ಆಲ್ ರೌಂಡ್ ಆಟ

"ಸ್ವ್ಯಾಬ್" ಸದಸ್ಯರಾದ ಅಭಿಷೇಕ್ ಭಾಡ್ಕರ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ತಂಡದವರು ಪಣಜಿಯಲ್ಲಿ ಎಸ್.ಜೆ.ಎಫ್.ಐ. ಆಶ್ರಯದಲ್ಲಿ ನಡೆಯುತ್ತಿರುವ ಜೆ.ಕೆ.ಬೋಸ್ ಟ್ವೆಂಟಿ-20 ಕ್ರಿಕೆಟ್ ಟೂನರ್ಿಯ ಮೊದಲ ಪಂದ್ಯದಲ್ಲಿ ಗೆದ್ದು, ಶುಭಾರಂಭ ಮಾಡಿದ್ದಾರೆ.

ಗೋವಾ ಕ್ರೀಡಾ ಪ್ರಾಧಿಕಾರ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ವಲಯ 26 ರನ್ನುಗಳಿಂದ ಪಶ್ಚಿಮ ವಲಯ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ವಲಯ: 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 (ಸತೀಶ್ ವಿಶ್ವನಾಥ್ 41, ಆರ್.ಕೌಶಿಕ್ 35, ಅಭಿಷೇಕ್ ಭಾಡ್ಕರ್ 45); ಪಶ್ಚಿಮ ವಲಯ: 20 ಓವರ್ಗಳಲ್ಲಿ 7 ವಿಕೆಟ್ಗೆ 137 (ಅಭಿಷೇಕ್ ಭಾಡ್ಕರ್ 10ಕ್ಕೆ2); ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 26 ರನ್ನುಗಳ ಜಯ.

"ಸ್ವ್ಯಾಬ್" ಖಂಡನೆ...!

ಮಾವೋ ವಾದಿಗಳಿಗೆ ಸಂಬಂಧಿಸಿದ ವರದಿಯ ಸುದ್ದಿ ಮೂಲವನ್ನು ಬಹಿರಂಗಪಡಿಸಬೇಕೆಂದು ಶಿವಮೊಗ್ಗ ಪೊಲೀಸರು "ಪ್ರಜಾವಾಣಿ" ಪತ್ರಿಕೆಯ ಸಹ ಸಂಪಾದಕರಾದ ಪದ್ಮರಾಜ ದಂಡಾವತಿ ಮತ್ತು ವರದಿಗಾರ ರಾಹುಲ್ ಬೆಳಗಲಿ ಅವರಿಗೆ ನೋಟಿಸ್ ನೀಡಿರುವುದನ್ನು "ಸ್ವ್ಯಾಬ್" ಖಂಡಿಸುತ್ತದೆ.

ಪತ್ರಕರ್ತರಿಗೆ ನೋಟಿಸ್ ನೀಡಿರುವ ಪೊಲೀಸರು ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿರುವುದನ್ನು "ಸ್ವ್ಯಾಬ್" ವಿರೋಧಿಸುತ್ತದೆ. ಅಷ್ಟೇ ಅಲ್ಲ "ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕು" ಎಂದು ಆಗ್ರಹಿಸುತ್ತದೆ.

SJFI National convention in Panaji

PANAJI, May 4: Twice Olympian S. S. Narayan, Olympian Fortunato Franco, AIFF Player of the Decade (1985-95), Brahmanand Shankawalkar and former Indian forward Bruno Countinho will be the panelists for the FIFA World Cup 2010 seminar to be held as part of the 34th National convention of the Sports Journalists’ Federation of India (SJFI) in Panaji from May 5 to 9.

The five-day event will also feature discussions on the future of Indian cricket (May 5), the Olympic Gold Quest project (May 6) and Indian rugby (May 8). The football seminar is slated for May 7.

Competitions on a zonal basis for the J.K. Bose Twenty20 cricket tournament, A C Bali Table Tennis Tournament and the ESPN –STAR penalty kicks will be the other highlight of the convention. The event will be attended by around 100 sports journalists representing 16 States including members of the Sports Journalists’ Association of Goa.

V.M. Prabhu Desai, Executive Director, Sports Authority of Goa will be the chief guest at the inaugural session on May 6.

The seminar on the future of Indian cricket will have the august presence of former Indian stumper and chairman of the selection committee, Kiran More, and distinguished first class cricketer, Amol Muzumdar. Kishen Narsi, executive committer member, International Amateur Boxing Federation (AIBA), and former Indian hockey captain, Olympian Viren Rasquinha (CEO, Olympic Gold Quest), will be key speakers at the discussion on Olympic disciplines while Greg Davey, Development Manger, Rugby India will make a presentation on India’s preparations for the Commonwealth Games to be held in New Delhi in October.

The convention and related activities are being supported by a host of corporates including Valuable Group, UFO Moviez, Standard Chartered Bank, ESPN-STAR Sports, NIKE, Procam International, UB Group, Kingfisher, Coca Cola India, Percept D’ Mark, SERVO, Essar, Vinsura and Rugby India.

In a special message to the SJFI, the Union Minister of Sports and Youth Affairs, M. S. Gill said: “I find that a very impressive four-day programme has been made out and it should be a fine opportunity for sports journalists and sportspersons to have a dialogue on matters of National interest.”

The convention is being held in Goa for the first time. The cricket tournament will be held at Panjim Gymkhana and SAG ground, Campal. Table Tennis and Penalty Kicks will be at the SAG complex.

ಜೆ.ಕೆ. ಬೋಸ್ ಟ್ರೋಫಿಗೆ ಬೆಂಗಳೂರು ಕ್ರೀಡಾ ವರದಿಗಾರರು

ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ವು ಈ ಬಾರಿಯ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಗೋವಾದಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ (ಇದೇ ವಾರ) ಆಯೋಜಿಸುತ್ತಿದೆ. ಇದಕ್ಕಾಗಿ ರಚಿಸಲಾಗಿರುವ ದಕ್ಷಿಣ ವಲಯ ತಂಡದಲ್ಲಿ ಬೆಂಗಳೂರು ಕ್ರೀಡಾ ಬರಹಗಾರರ ಸಂಘ(ಸ್ವ್ಯಾಬ್)ದ ಐವರು ಸದಸ್ಯರು ಆಯ್ಕೆಯಾಗಿದ್ದಾರೆ.

ಆರ್. ಕೌಶಿಕ್ (ಡೆಕ್ಕನ್ ಹೆರಾಲ್ಡ್), ಸತೀಶ್ ವಿಶ್ವನಾಥ್ (ಟೈಮ್ಸ್ ಆಫ್ ಇಂಡಿಯಾ), ಮೈಲಾರಲಿಂಗ ದಿಂಡಲಕೊಪ್ಪ (ವಿಜಯ ಕರ್ನಾಟಕ), ಅಭಿಷೇಕ್ ಬಾಡ್ಕರ್ (ಡೆಕ್ಕನ್ ಕ್ರಾನಿಕಲ್) ಹಾಗೂ ಮಲ್ಲಿಕಾರ್ಜುನ್ ಚರಣವಾಡಿ (ಉದಯವಾಣಿ) ಅವರು ದಕ್ಷಿಣ ವಲಯವನ್ನು ಪ್ರತಿನಿಧಿಸಲಿರುವ "ಸ್ವ್ಯಾಬ್" ಸದಸ್ಯರು.

ಈ ಐವರು ಸ್ವ್ಯಾಬ್ ಸದಸ್ಯರು ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ದಕ್ಷಿಣ ವಲಯ ತಂಡದ ಶ್ರೇಯವನ್ನು ಹೆಚ್ಚಿಸಲಿ ಎಂದು "ಸ್ವ್ಯಾಬ್" ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಹಾರೈಸುತ್ತೇವೆ.

ಎಸ್.ಜೆ.ಎಫ್.ಐ. ಪ್ರತಿ ವರ್ಷವೂ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ದಕ್ಷಿಣ ವಲಯ ತಂಡವನ್ನು "ಸ್ವ್ಯಾಬ್" ಸದಸ್ಯರು ಪ್ರತಿನಿಧಿಸುತ್ತಾ ಬಂದಿದ್ದಾರೆ. ನಮ್ಮ ಅನೇಕ ಸದಸ್ಯರು ಉತ್ತಮ ಪ್ರದರ್ಶನದಿಂದ ಮೆಚ್ಚುಗೆ ಕೂಡ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ಇರುವ ಎಲ್ಲ ಪ್ರಮುಖ ಪತ್ರಿಕೆಗಳ ಕ್ರೀಡಾ ವರದಿಗಾರರಿಗೆ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದು "ಸ್ವ್ಯಾಬ್" ಪ್ರಯತ್ನವಾಗಿದೆ. ಆದರೆ ಎಸ್.ಜೆ.ಎಫ್.ಐ. ನೀಡಿರುವ ಕೋಟಾದಂತೆ ನಾವು ನಮ್ಮ ಪ್ರತಿನಿಧಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕಾಗುತ್ತದೆ. ಆದ್ದರಿಂದ ರೊಟೇಷನ್ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆ ಪ್ರಕಾರ ಪ್ರತಿಯೊಂದು ವರ್ಷವೂ ಆಟಗಾರರನ್ನು ಕೆಲವು ಪತ್ರಿಕೆಗಳಿಂದ ಆಯ್ಕೆ ಮಾಡಲಾಗುತ್ತದೆ.

ಮುಂದೆಯೂ ಈ ನಿಯಮವನ್ನು ಅನ್ವಯಿಸಿಕೊಂಡು ಪ್ರತಿಯೊಂದು ವರ್ಷವೂ ಆಯ್ದ ಕೆಲವು ಪತ್ರಿಕೆಗಳ ಕ್ರೀಡಾ ವರದಿಗಾರರಿಗೆ ಮಾತ್ರ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ರೊಟೇಷನ್ ಪ್ರಕಾರ ಆಯ್ಕೆ ಮಾಡುವ ಪತ್ರಿಕೆಗಳಿಂದ ಒಂದು ವೇಳೆ ಯಾರಾದರೂ ಆಡಲು ಹೋಗುವುದಿಲ್ಲ ಎಂದು ತಿಳಿಸಿದ ಸಂದರ್ಭದಲ್ಲಿ ಮಾತ್ರ ಬೇರೆಯವರಿಗೆ ಆ ಸ್ಥಾನದಲ್ಲಿ ಜೆ.ಕೆ.ಬೋಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಕ್ಕೆ ಕಳುಹಿಸಲಾಗುವುದು.

ರೊಟೇಷನ್ ಪದ್ಧತಿ ವಿಷಯದಲ್ಲಿ ಯಾವುದೇ ಆಕ್ಷೇಪಗಳಿಗೆ ಅವಕಾಶವಿಲ್ಲ. ಏಕೆಂದರೆ ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವುದು "ಸ್ವ್ಯಾಬ್" ಆಶಯ. ಆದ್ದರಿಂದ ತಾವೆಲ್ಲರೂ ಈ ವಿಷಯವನ್ನು ಸಹೃದಯರಾಗಿ ಸ್ವೀಕರಿಸಬೇಕು ಹಾಗೂ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿ ಆಡಲು ಹೋಗುವ ನಮ್ಮ ಮಿತ್ರರಿಗೆ ಶುಭ ಹಾರೈಸಬೇಕಾಗಿ ವಿನಂತಿ.

"LEG CRICKET" MATCH FOR "SWAB" MEMBERS...!

Sports writers association of Bangalore (SWAB) in association with Karnataka state Leg Cricket Association is organising “Leg Cricket” match on 8th May, 2010 (Saturday) at 9-30 AM at Kittur Rani Chennama Ground (Jayanagar BBMP Stadium).

Influenced by cricket “Leg Cricket” is a unique form of cricket, you will come to know the beauty of the game. It can also be known from the following website: http://www.legcricket.com

SWAB is forming a team to participate to compete in the game. Those who are interested should inform at the earliest. The match being played on 8th May, 2010 at 9-30 AM. All the team members who have shown interest in participating should be present at the venue at 9 AM.

Last date of expressing interest in the game is 6th May, 2010. Interested may contact the following.

D.V. Garud (9845332347)
Dindalakoppa (9341126307)
G. Subash Chandra (9663331235)

ಬೆಂಗಳೂರು ಕ್ರೀಡಾ ಲೇಖಕರ ಸಂಘ(ಸ್ವ್ಯಾಬ್)ವು ಕರ್ನಾಟಕ ರಾಜ್ಯ ಲೆಗ್ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ "ಲೆಗ್ ಕ್ರಿಕೆಟ್" ಪ್ರದರ್ಶನ ಪಂದ್ಯವನ್ನು 8ನೇ ಮೇ 2010 (ಶನಿವಾರ) ರಂದು ಬೆಳಿಗ್ಗೆ 9.30ಕ್ಕೆ ಆಯೋಜಿಸುತ್ತಿದೆ. ಕ್ರೀಡಾ ಪತ್ರಕರ್ತರ ತಂಡ ಹಾಗೂ "ಲೆಗ್ ಕ್ರಿಕೆಟ್" ಶಿಬಿರದ ತಂಡದ ನಡುವೆ ಪಂದ್ಯವನ್ನು ನಡೆಸಲು ಉದ್ದೇಶಿಸಲಾಗಿದೆ.


"ಲೆಗ್ ಕ್ರಿಕೆಟ್" ಎನ್ನುವುದು "ಕ್ರಿಕೆಟ್"ನಿಂದ ಪ್ರೇರಣೆ ಪಡೆದು ಹುಟ್ಟಿಕೊಂಡ ಒಂದು ವಿಶಿಷ್ಟವಾದ ನೂತನ ಕ್ರೀಡೆಯಾಗಿದೆ. ಸಾಕಷ್ಟು ರಂಜನೆಯ ಅಂಶಗಳು ಈ ಆಟದಲ್ಲಿ ಇವೆ. ಆದ್ದರಿಂದ ತಾವೂ ಇದರಲ್ಲಿ ಪಾಲ್ಗೊಂಡು ಈ ಪ್ರದರ್ಶನ ಪಂದ್ಯವನ್ನು ಯಶಸ್ವಿಯಾಗಿಸಬೇಕಾಗಿ ಕೋರುತ್ತೇವೆ. "ಲೆಗ್ ಕ್ರಿಕೆಟ್" ಆಟ ಎಂದರೇನು ಹಾಗೂ ಅದರ ನಿಯಮಗಳು ಏನು ಎನ್ನುವುದನ್ನು http://www.legcricket.com ಈ ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ.

ಪ್ರದರ್ಶನ ಪಂದ್ಯಕ್ಕೆ ಬೆಂಗಳೂರು ಕ್ರೀಡಾ ಲೇಖಕರ ಸಂಘ(ಸ್ವ್ಯಾಬ್)ದ ಹನ್ನೊಂದು ಸದಸ್ಯರ ತಂಡವನ್ನು ರಚಿಸಬೇಕಾಗಿದೆ. "ಸ್ವ್ಯಾಬ್"ನ ಆಸಕ್ತ ಸದಸ್ಯರು ಈ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಮ್ಮ ಪ್ರವೇಶವನ್ನು ಅತಿ ಶೀಘ್ರದಲ್ಲಿಯೇ ಖಚಿತಪಡಿಸಬೇಕಾಗಿ ವಿನಂತಿ.

ಪಂದ್ಯವು 8ನೇ ಮೇ 2010 ರಂದು ಬೆಳಿಗ್ಗೆ ಸರಿಯಾಗಿ 9.30 ಗಂಟೆಗೆ ಆರಂಭವಾಗಲಿದೆ. ತಂಡಕ್ಕೆ ಪ್ರವೇಶ ನೀಡಿದ ಎಲ್ಲರೂ 8ನೇ ಮೇ 2010 ರಂದು ಸರಿಯಾಗಿ ಬೆಳಿಗ್ಗೆ 9.00ಕ್ಕೆ ಪಂದ್ಯ ನಡೆಯುವ ಸ್ಥಳದಲ್ಲಿ ಹಾಜರಾಗಬೇಕಾಗಿ ವಿನಂತಿ.

ಬಯಸುವವರು ತಮ್ಮ ಪ್ರವೇಶವನ್ನು ಈ ಕೆಳಕಂಡವರಿಗೆ ದಿನಾಂಕ 6ನೇ ಮೇ 2010ಕ್ಕೆ ಮುಂಚಿತವಾಗಿ ಖಚಿತಪಡಿಸಬೇಕಾಗಿ ವಿನಂತಿ.

ಡಿ. ವ್ಹಿ. ಗರುಡ (9845332347)
ದಿಂಡಲಕೊಪ್ಪ (9341126307)
ಜಿ.ಸುಭಾಷ್ ಚಂದ್ರ (9663331235)

SPORTS JOURNALISM...!

Sports journalism is a form of journalism that reports on sports topics and events. While the sports department within some newspapers has been mockingly called the toy department, because sports journalists do not concern themselves with the 'serious' topics covered by the news desk, sports coverage has grown in importance as sport has grown in wealth, power and influence. Sports journalism is an essential element of any news media organization.


-From Wikipedia

S.S.SHREEKUMAR ELECTED AS PRESIDENT

S.S. Shreekumar of the New Indian Express, Bangalore, was unanimously elected as the President of the Sports Writers' Association of Bangalore for the period 2010 to 2012 at the annual general meeting held at the Press Club of Bangalore on Friday (30th April 2010).


The following were elected as office-bearers:


President: S.S. Shreekumar
(New Indian Express)
Vice-president: Dindal Koppa
(Vijay Karnataka)
Gen. Secretary: D.V. Garud
(Prajavani)
Jt secretary: Satish Paul
(Bangalore Mirror)
Treasurer: Ravi Chakravarthy
(Deccan Chronicle)

Executive Committee members:

Satish Vishwanath (Times of India)
K.C. Vijaykumar (The Hindu)
R. Kaushik (Deccan Herald)
Subhas Chandra (Prajavani)
R. Satya (Times of India)
Dev Sukumar (DNA)